unfoldingWord 34 - ಯೇಸು ಇತರ ಕಥೆಗಳನ್ನು ಹೇಳಿದನು
![unfoldingWord 34 - ಯೇಸು ಇತರ ಕಥೆಗಳನ್ನು ಹೇಳಿದನು](https://static.globalrecordings.net/300x200/z40_Mt_13_19.jpg)
Преглед: Matthew 13:31-46; Mark 4:26-34; Luke 13:18-21;18:9-14
Број на скрипта: 1234
Јазик: Kannada
Публиката: General
Цел: Evangelism; Teaching
Features: Bible Stories; Paraphrase Scripture
Статус: Approved
Скриптите се основни упатства за превод и снимање на други јазици. Тие треба да се приспособат по потреба за да бидат разбирливи и релевантни за секоја различна култура и јазик. На некои употребени термини и концепти може да им треба повеќе објаснување или дури да бидат заменети или целосно испуштени.
Текст на скрипта
![](https://static.globalrecordings.net/300x200/z40_Mt_13_12.jpg)
ಯೇಸು ದೇವರ ರಾಜ್ಯದ ಕುರಿತು ಅನೇಕ ಕಥೆಗಳನ್ನು ಜನರಿಗೆ ಹೇಳಿದನು. ಉದಾಹರಣೆಗೆ, ಆತನು, "ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. ಅದು ಅತಿ ಸಣ್ಣ ಬೀಜವಾಗಿದೆ ಎಂದು ನಿಮಗೆ ತಿಳಿದಿದೆ.”
![](https://static.globalrecordings.net/300x200/z40_Mt_13_13.jpg)
“ಆದರೂ ಅದು ಬೆಳೆದ ಮೇಲೆ ತೋಟದ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ.”
![](https://static.globalrecordings.net/300x200/z40_Mt_13_14.jpg)
ಯೇಸು, "ದೇವರ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಒಬ್ಬ ಸ್ತ್ರೀಯು ಹಿಟ್ಟೆಲ್ಲಾ ಹುಳಿಯಾಗುವಷ್ಟರ ಮಟ್ಟಿಗೆ ಅದನ್ನು ರೊಟ್ಟಿಯ ಹಿಟ್ಟಿನಲ್ಲಿ ಕಲಸಿಡುತ್ತಾಳೆ." ಎಂಬ ಮತ್ತೊಂದು ಕಥೆಯನ್ನು ಹೇಳಿದನು
![](https://static.globalrecordings.net/300x200/z40_Mt_13_18.jpg)
"ದೇವರ ರಾಜ್ಯವು ಒಬ್ಬನು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಮತ್ತೊಬ್ಬನು ಆ ನಿಧಿಯನ್ನು ಕಂಡುಕೊಂಡು, ಅದು ಬೇಕೆಂದು ಬಹಳವಾಗಿ ಬಯಸಿದನು. ಆದ್ದರಿಂದ ಅವನು ಅದನ್ನು ಮತ್ತೆ ಮುಚ್ಚಿಟ್ಟನು. ಅವರು ಸಂತೋಷದಿಂದ ತುಂಬಿದವನಾಗಿ ಹೊರಟು ಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ನಿಧಿಯಿದ್ದ ಆ ಹೊಲವನ್ನು ಕೊಂಡುಕೊಂಡನು."
![](https://static.globalrecordings.net/300x200/z40_Mt_13_19.jpg)
"ದೇವರ ರಾಜ್ಯವು ಬಹು ಬೆಲೆಯುಳ್ಳ ಪರಿಪೂರ್ಣವಾದ ಮುತ್ತಿಗೆ ಹೋಲಿಕೆಯಾಗಿದೆ. ಮುತ್ತಿನ ವರ್ತಕನು ಅದನ್ನು ಕಂಡುಕೊಂಡಾಗ, ಅವನು ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು."
![](https://static.globalrecordings.net/300x200/z42_Lk_18_02.jpg)
ತಾವು ಒಳ್ಳೆಯದನ್ನು ಮಾಡುತ್ತಿರುವುದರಿಂದ ದೇವರು ತಮ್ಮನ್ನು ಅಂಗೀಕರಿಸಿಕೊಳ್ಳವನೆಂದು ಭಾವಿಸಿದಂಥ ಜನರಿದ್ದರು. ಈ ಜನರು ಒಳ್ಳೆಯದನ್ನು ಮಾಡದ ಇತರರನ್ನು ತಾತ್ಸಾರಮಾಡುತ್ತಿದ್ದರು. ಆದ್ದರಿಂದ ಯೇಸು ಅವರಿಗೆ ಈ ಕಥೆಯನ್ನು ಹೇಳಿದನು: "ಇಬ್ಬರು ಮನುಷ್ಯರಿದ್ದರು, ಅವರಿಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ತೆರಿಗೆ ವಸೂಲಿಗಾರನಾಗಿದ್ದನು ಮತ್ತು ಇನ್ನೊಬ್ಬನು ಧಾರ್ಮಿಕ ಮುಖಂಡನಾಗಿದ್ದನು."
![](https://static.globalrecordings.net/300x200/z42_Lk_18_03.jpg)
"ಧಾರ್ಮಿಕ ಮುಖಂಡನು ಈ ರೀತಿ ಪ್ರಾರ್ಥಿಸಿದನು: ‘ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಜನರಂತೆಯೂ ಅಥವಾ ಈ ಸುಂಕದವನಂತೆಯ ನಾನು ಪಾಪಿಯಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ.’”
![](https://static.globalrecordings.net/300x200/z42_Lk_18_04.jpg)
“’ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ಉಪವಾಸ ಮಾಡುತ್ತೇನೆ ಮತ್ತು ನಾನು ಪಡೆಯುವ ಎಲ್ಲಾ ಹಣದಲ್ಲಿ ಮತ್ತು ಪಧಾರ್ಥಗಳಲ್ಲಿ ಹತ್ತರಷ್ಟು ಭಾಗವನ್ನು ನೀಡುತ್ತೇನೆ.’”
![](https://static.globalrecordings.net/300x200/z42_Lk_18_05.jpg)
“ಆದರೆ ತೆರಿಗೆ ವಸೂಲಿಗಾರನು ಧಾರ್ಮಿಕ ಮುಖಂಡನಿಂದ ದೂರದಲ್ಲಿ ನಿಂತುಕೊಂಡನು. ಅವನು ಆಕಾಶದ ಕಡೆಗೆ ನೋಡಲಿಲ್ಲ. ಆದರೆ ಅವನು ತನ್ನ ಮುಷ್ಠಿಯಿಂದ ತನ್ನ ಎದೆಯನ್ನು ಬಡುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು' ಎಂದು ಪ್ರಾರ್ಥಿಸಿದನು."
![](https://static.globalrecordings.net/300x200/z40_Mt_18_01.jpg)
ಆಗ ಯೇಸು, "ತೆರಿಗೆ ವಸೂಲಿಗಾರನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ಅವನನ್ನು ನೀತಿವಂತನೆಂದು ಘೋಷಿಸಿದನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆತನು ಧಾರ್ಮಿಕ ಮುಖಂಡನ ಪ್ರಾರ್ಥನೆಯನ್ನು ಇಷ್ಟಪಡಲಿಲ್ಲ. ದೇವರು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನನ್ನು ಅವಮಾನಿಸುವನು, ಆದರೆ ತನ್ನನ್ನು ತಗ್ಗಿಸಿಕೊಳ್ಳುವವನು ಆತನು ಸನ್ಮಾನಿಸುವನು."